
ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿ ಸಮೀಪದ ನಾಲೂರು ಯಜ್ಞ ಭಟ್ (70) ಇವರು ಶುಕ್ರವಾರ ತಡರಾತ್ರಿ ಇಹಲೊಕ ತ್ಯಜಿಸಿದ್ದಾರೆ.

ಮೃತರು ನಾಲೂರು ಮಲ್ಲಿಕಾರ್ಜುನ ದೇವಸ್ಥಾನದ ಪ್ರದಾನ ಅರ್ಚಕರು ಹಾಗೂ ಜ್ಯೋತಿಷಿಯಾಗಿ ಸೇವೆ ಸಲ್ಲಿದವರು.

ಮಡಿ ಪೂಜೆ ಕೈಂಕಾರ್ಯ ದಲ್ಲಿ ಅಚ್ಚುಕಟ್ಟು, ಶಿಸ್ತಿನ ಜೀವನಕ್ಕೆ ಹೆಸರುವಾಸಿ ಯಾಗಿದ್ದರು.

ನಾಲೂರು ಸೇರಿದಂತೆ ಹಲವಾರು ಊರಿಗಳಿಂದ ತಮ್ಮ ಮಕ್ಕಳು ಹಾಗೂ ಮನೆಯ ವಿಚಾರದಲ್ಲಿ ಕೇಳಿಸುವ ಹಾಗೂ ಅವರ ಆಶೀರ್ವಾದ ಪಡೆಯುವ ಸಲುವಾಗಿ ಸಹಸ್ರ ಭಕ್ತ ಸಮೂಹವನ್ನು ಸಂಪಾದಿಸಿದ್ದರು.

ವಯೋಸಹಜ ಖಾಯಿಲೆ ಯಿಂದ ಆಸ್ಪತ್ರೆಗೆ ತಿಂಗಳುಗಳ ಕಾಲ ಉಳಿದಿದ್ದು ಇತ್ತೀಚಿಗೆ ಚಿಕಿತ್ಸೆಗೆ ಸ್ಪಂದನೆ ನೀಡದ ಇವರು ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರ ಅಭಿಮಾನಿಗಳಿಗೆ ಹಾಗೂ ಸ್ನೇಹಿತರು ಇವರ ಅಗಲಿಕೆಗೆ ಕಂಬನಿ ಮಿಡಿದ್ದಾರೆ.ನಾಲೂರಿನಲ್ಲಿ ಅಂತಿಮ ಮೆರವಣಿಗೆ ಸಾಗಿ ನಂತರ ತೀರ್ಥಹಳ್ಳಿ ಯ ಚಿತಾಗಾರದಲ್ಲಿ ಬ್ರಾಹ್ಮಣ ವಿಧಿ ವಿಧಾನದ ಮೂಲಕ ಅಂತಿಮ ಸಂಸ್ಕಾರ ನೆರವೇರಲಿದೆ