– ಯುವ ಕವಯಿತ್ರಿಗೆ ಎಲ್ಲೆಡೆ ಮೆಚ್ಚುಗೆ

ꜱᴀᴛʜʏᴀꜱʜᴏᴅʜᴀ ɴᴇᴡꜱ
ꜱᴀᴛʜʏᴀꜱʜᴏᴅʜᴀ ɴᴇᴡꜱ
ದಸರಾ ಕವಿ ಕಾವ್ಯ ಸಂಭ್ರಮ ರಾಜ್ಯಮಟ್ಟದ ಕಾವ್ಯೋತ್ಸವ ಕಾರ್ಯಕ್ರಮವನ್ನು ಸ್ಪಂದನ ಸಾಂಸ್ಕೃತಿಕ ಪರಿಷತ್ ವತಿಯಿಂದ 29/11 /23 ರಂದು ಮೈಸೂರಿನ ನೇಗಿಲಯೋಗಿ ಮರಳೇಶ್ವರ ಸಮುದಾಯ ಭವನದಲ್ಲಿ ನಡೆಯಿತು. ಡಾ ಸತೀಶ್ ಜವರೇಗೌಡರು ಇದರ ಆಯೋಜಕರಾಗಿದ್ದು, ಈ ಕವಿಗೋಷ್ಠಿಯಲ್ಲಿ ಯುವ ಕವಯಿತ್ರಿ ತುಮಕೂರಿನ ಶ್ರೀಮತಿ ನಿತ್ಯಶ್ರೀ ಸುಶಿಲ್ ಕನ್ನಡದ ದೀಪ ಎಂಬ ಕವನ ವಾಚಿಸಿ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರವನ್ನು ಪ್ರೊ. ಕೆ ಸೌಭಾಗ್ಯ, ರವರ ಅಧ್ಯಕ್ಷತೆಯಲ್ಲಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಶ್ರೀ ಹೆಚ್. ಎಸ್ ಬಸವರಾಜು, ಹಿರಿಯ ಸಾಹಿತಿಗಳಾದ ಡಾ ಸಿ. ಪಿ. ಕೃಷ್ಣ ಕುಮಾರ್, ಹೆಸರಾಂತ ಕವಯಿತ್ರಿ ಶಶಿಕಲಾ ವಸ್ತ್ರದ ಮತ್ತು ಶ್ರೀಯುತ ಶಿವರಾಜು ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ಇನ್ನಿತರ ಅಥಿತಿ ಗಣ್ಯರ ಅಮೃತ ಹಸ್ತದಿಂದ ಪಡೆದರು ಜೊತೆಗೆ ಇನ್ನಿತರ ಹಲವು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ನೆನಪಿನ ಕಾಣಿಕೆ ಪಡೆದರು.