ತೀರ್ಥಹಳ್ಳಿ : ತಾಲೂಕಿನಲ್ಲಿ ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಓಡಾಡುತ್ತಿರುವುದು ಹಾಗೂ ಎಲ್ಲೆಂದರಲ್ಲಿ ಕಾರು ನಿಲುಗಡೆ ಹೀಗೆ ಹಲವಾರು ಪ್ರಕರಣಗಳು ಹೆಚ್ಚಾಗುತ್ತಿದ್ದು ಜು 18 ರಂದು ಹೆಲ್ಮೆಟ್ ಧರಿಸದೆ ಇದ್ದವರಿಗೆ ಪೊಲೀಸರು ದಂಡ ಹಾಕುವುದರ ಜೊತೆಗೆ ಎಚ್ಚರಿಕೆ ಕೂಡ ನೀಡಿದ್ದಾರೆ.

ತೀರ್ಥಹಳ್ಳಿ ಪೊಲೀಸ್ ಠಾಣೆಯ ಪಿ ಎಸ್ ಐ ಸುಷ್ಮಾ ರವರು ಖುದ್ದಾಗಿ ಫೀಲ್ಡ್ ಗೆ ಇಳಿದಿದ್ದು ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಹಾಗೂ ಬೇಜವಾಬ್ದಾರಿಯಿಂದ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವ ಮಾಲೀಕರಿಗೆ ದಂಡ ವಿಧಿಸಿದ್ದಾರೆ.

ಈ ಕಾರ್ಯಾಚರಣೆ ಯಲ್ಲಿ ಪೊಲೀಸ್ ಪೇದೆ ಗಳಾದ ಪ್ರಸಾದ್ ಹಾಗೂ ಪ್ರದೀಪ್ ಕೂಡ ಇದ್ದರು.

ಇನ್ನು ಇದೆ ಸಂದರ್ಭದಲ್ಲಿ ಕೆಲವರು ನಮ್ಮನ್ನು ಬಿಟ್ಟು ಕಳುಹಿಸಿ ಎಂದು ದೊಡ್ಡ ದೊಡ್ಡವರ ಬಳಿ ಕರೆ ಮಾಡಿಸುತ್ತಿದ್ದದ್ದು ಕೂಡ ಸತ್ಯಶೋಧ ಮಾಧ್ಯಮ ಗಮನಿಸಿದೆ. ಒಂದಂತೂ ಸತ್ಯ ಹೆಲ್ಮೆಟ್ ಇಲ್ಲದೆ ವಾಹನ ಚಲಿಸಿ ಅಪಘಾತವಾದರೆ ನಿಮ್ಮೊಂದಿಗೆ ಯಾರು ಇರಲ್ಲ ಮೊದಲೇ ನಿಮ್ಮ ಸುರಕ್ಷತೆಯನ್ನ ನೋಡಿಕೊಳ್ಳುವುದು ಅಗತ್ಯ ಎಂಬುದು ಸತ್ಯಶೋಧ ಮಾಧ್ಯಮದ ಕಳಕಳಿ.

Leave a Reply

Your email address will not be published. Required fields are marked *