- ಅಡಿಕೆ ತೋಟಕ್ಕೆ ಕೊಳೆ ರೋಗ ಭೀತಿ – ರೈತರ ಅಳಲು
ಸತ್ಯಶೋಧ ನ್ಯೂಸ್ ಡೆಸ್ಕ್ : ರಾಜ್ಯದ ಹಲವೆಡೆ ಉತ್ತರೆ ಮಳೆಯ ಕಾಟ ಜೋರಾಗಿದ್ದು ಜನ ಜೀವನ ಕಷ್ಟಕರವಾಗಿದೆ. ಹವಾಮಾನ ಇಲಾಖೆಯು ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಅತಿ ಭಾರೀ ಮಳೆಯಾಗಲಿದ್ದು, ಮೂರೂ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಹಾಗೂ ಮಲೆನಾಡು ಭಾಗದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ತಿಳಿಸಿದೆ. ಇನ್ನೂ ಅಡಿಕೆಗೆ ಕೊಳೆರೋಗ ಶುರುವಾಗಿದ್ದು ರೈತರ ಬದುಕು ಕಷ್ಟಕರವಾಗಿದೆ.


