ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಹಾಗೂ ಅವರ ಗ್ಯಾಂಗ್ ನಡೆಸಿದ್ದ ಕ್ರೌರ್ಯದ ಎರಡೂ ಚಿತ್ರಗಳಲ್ಲಿ ಡಿ ಗ್ಯಾಂಗ್‌ ಪಟ್ಟಣಗೆರೆ ಶೆಡ್‌ನಲ ಕಥೆಗಳನ್ನು ತಿಳಿಸಿವೆ. ಯಾವುದೇ ರೀತಿಯ ಸಹಾನುಭೂತಿಗೂ ಈ ಗ್ಯಾಂಗ್‌ ಅರ್ಹರಲ್ಲ ಎನ್ನುವುದು ಈ ಫೋಟೋಗಳನ್ನು ನೋಡಿದರೆ ಸಾಬೀತಾಗುತ್ತದೆ.ಜೊತೆಗೆ ಫೋಟೋ ಈ ಫೋಟೋಗಳು ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಘಟನೆ ನಡೆದ ದಿನದ ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ತೆಗೆದ ಫೋಟೋ ಇದಾಗಿದೆ. ದರ್ಶನ್ ಬರುವುದಕ್ಕೂ ಮುನ್ನ ಒಂದು ಸುತ್ತು ಈ ಗ್ಯಾಂಗ್‌ ಹಲ್ಲೆ ನಡೆಸಿತ್ತು ಎನ್ನುವುದು ಗೊತ್ತಾಗಿದೆ. ಪಟ್ಟಣಗೆರೆ ಶೆಡ್​ನ ನೆಲದ ಮೇಲೆ ಬಿದ್ದಿರುವ ರೇಣುಕಾಸ್ವಾಮಿ ಒಂದು ಫೋಟೋ ಇದಾಗಿದೆ. ನೆಲದ ಮೇಲೆ ರೇಣುಕಾಸ್ವಾಮಿ ಬಿದ್ದಿರುವ ಫೋಟೋವನ್ನು ಪಟ್ಟಣಗೆರೆ ಶೆಡ್​​ನ ನೌಕರನೊಬ್ಬ ತೆಗೆದಿದ್ದಾರೆ. ಆ ಬಳಿಕ ಶೆಡ್‌ನ ನೌಕರ ಈ ಫೋಟೋವನ್ನು ವಿನಯ್‌ನ ಮೊಬೈಲ್‌ಗೆ ಕಳಿಸಿದ್ದಾನೆ. ಅದೇ ವ್ಯಕ್ತಿಯನ್ನು ಪೊಲೀಸರು ಪ್ರತ್ಯಕ್ಷ ಸಾಕ್ಷಿ ಮಾಡಿಕೊಂಡಿದ್ದಾರೆ. ರೇಣುಕಾಸ್ವಾಮಿ ಬದುಕಿರುವಾಗಿನ ಫೋಟೊ ಇದಾಗಿದ್ದು, ಪಕ್ಕದಲ್ಲಿ ನಿಂತ ಲಾರಿ ಕೂಡ ಇದಕ್ಕೆ ಸಾಕ್ಷಿಯಾಗಿದೆ. KA 51 AF 0454 ನಂಬರಿನ ಲಾರಿ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಎನಿಸಿಕೊಂಡಿದೆ

Leave a Reply

Your email address will not be published. Required fields are marked *