

ಶಿವಮೊಗ್ಗದ ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿದ್ದ (AEE) ಕೆ.ಟಿ. ರತ್ನಾಕರ್ ಕೆರೆಕೊಪ್ಪ ಸೆ 29 ರಂದು ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.ತೀರ್ಥಹಳ್ಳಿ, ಹೊಸನಗರ, ಶೃಂಗೇರಿ, ಚಿಕ್ಕಮಗಳೂರು, ಬಾಣಾವರ

ಇನ್ನೂ ಮುಂತಾದ ಕಡೆ ಕಾರ್ಯನಿರ್ವಹಿಸಿ ತಮ್ಮ ಕರ್ತವ್ಯದಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸಿ ಇತರರಿಗೆ ಮಾದರಿಯಾಗಿದ್ದರು. ಮೃತರು ಪತ್ನಿ, ಪುತ್ರಿ, ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಜೊತೆಗೆ ಮೃತರ ಅಂತ್ಯಸಂಸ್ಕಾರವನ್ನು ಸೆ 30ರ ಮಂಗಳವಾರ ಮಧ್ಯಾಹ್ನ 3.೦೦ ಗಂಟೆಗೆ, ಶಿವಮೊಗ್ಗದಲ್ಲಿ ನಡೆಸಲಾಗುವುದೆಂದು ಕುಟುಂಬದ ಮೂಲದಿಂದ ತಿಳಿಬಂದಿದೆ.
