• 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಜೀವದ್ರವ ರಕ್ತ ಸಂಗ್ರಹ

ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂ ಏಸಿ ಯುವ ರೆಡ್ಕ್ರಾಸ್ ಎನ್ಎಸ್ಎಸ್ ಘಟಕ ಒಂದು ಮತ್ತು ಎರಡು ರೋವರ್ಸ್ ಎಂಡ್ ರೇಂಜರ್ಸ್ ರೆಡ್ ರಿಬ್ಬನ್ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಿರಿಯ ವಿದ್ಯಾರ್ಥಿಗಳ ಸಂಘ ಶಿವಮೊಗ್ಗದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಜೀವಿನಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ಇಂದು ಯಶಸ್ವಿ ರಕ್ತದಾನ ಶಿಬಿರ ಹಾಗೂ ರಕ್ತ ಗುಂಪು ಪರಿಶೀಲನಾ ಶಿಬಿರ ಕಾಲೇಜಿನ ಪ್ರಾಂಶುಪಾಲ ಡಾ ಕೆ ಉಮೇಶ್ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನೆರವೇರಿತು.ಮುಖ್ಯ ಅತಿಥಿಗಳು ಮಾತನಾಡಿ ರಕ್ತದಾನ ಮಾಡಲು ಹಿಂಜರಿಕೆ ಸಲ್ಲ ಪ್ರತಿ ಮೂರು ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು ರಕ್ತದಾನ ಮಾಡುವದರಿಂದ ಮನುಷ್ಯ ದೇಹ ಶುದ್ಧಗೊಳ್ಳುವುದೆಂದು ಅನಾರೋಗ್ಯದಿಂದ ಮುಕ್ತರಾಗಬಹುದು ಹಾಗೂ ಒಬ್ಬರು ನೀಡುವ ರಕ್ತದಿಂದ ಮೂರು ಜೀವ ಉಳಿಸುವ ಕಾರ್ಯ ನಡೆಯಲಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಯಾವುದೇ ಭಯ ಮುಜುಗರವಿಲ್ಲದೆ ವಿದ್ಯಾರ್ಥಿಗಳು ರಕ್ತದಾನ ಮಾಡಬಹುದು ಎಂದು ತಿಳಿಸಿದರು.ಕುಮಾರಿ ವಿಭಾ ಪ್ರಾರ್ಥಿಸಿದರು ರಂಜಿತಾ ಸ್ವಾಗತಿಸಿದರು ಕಾರ್ಯಕ್ರಮ ಅಧಿಕಾರಿ ಹೆಚ್ಚು ದೊಡ್ಡಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು ಶಿಬಿರದಲ್ಲಿ ಐವತ್ತು ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು

Leave a Reply

Your email address will not be published. Required fields are marked *