ತೀರ್ಥಹಳ್ಳಿ: ತಾಲೂಕು ಮುಜರಾಯಿ ದೇವಸ್ಥಾನಗಳ ಅರ್ಚಕರ ಅಗತ್ಯತೆಗಳನ್ನು ಆಲಿಸಿ, ಸ್ಪಂದಿಸುವ ಸಲುವಾಗಿ ರಾಜ್ಯ ಸರ್ಕಾರದ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕ ಮತ್ತು ಉಪಾಧಿವಂತರ ಒಕ್ಕೂಟ. ಇದರ ಸಂಘಟನಾ ಕಾರ್ಯದರ್ಶಿಗಳಾಗಿದ್ದ ರಂಗರಾಜನ್ ರವರ ಮಾರ್ಗದರ್ಶನದಲ್ಲಿ ಕೆಲವು ತಿಂಗಳ ಹಿಂದೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ಅರ್ಚಕ ಮಿತ್ರರು ಸಭೆ ನಡೆಸಿ ನೂತನವಾಗಿ “ತೀರ್ಥಹಳ್ಳಿ ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕ ಆಗಮಿಕ ಮತ್ತು ಉಪಾಧಿವಂತರ” ಒಕ್ಕೂಟದ ರಚನೆ ಮಾಡಿದ್ದಾರೆ.

ರಾಜ್ಯದಲ್ಲಿ ಸುಮಾರು 34,000ಕ್ಕೂ ಹೆಚ್ಚು ಮುಜರಾಯಿ ದೇವಸ್ಥಾನಗಳಿದ್ದು ತೀರ್ಥಹಳ್ಳಿ ತಾಲೂಕಿನಲ್ಲಿ ಸುಮಾರು 170 ಕ್ಕೂ ಹೆಚ್ಚು ಮುಜರಾಯಿ ದೇವಸ್ಥಾನಗಳಿದೆ. ಅಧಿಕೃತವಾಗಿ ತೀರ್ಥಹಳ್ಳಿ ತಾಲೂಕಿನಲ್ಲಿ ಮುಜರಾಯಿ ದೇವಾಲಯಗಳ ಒಕ್ಕೂಟದ ಉದ್ಘಾಟನಾ ಸಮಾರಂಬವು ಜೂನ್ 18ರ ಬುಧವಾರ ಮಧ್ಯಾಹ್ನ 2.30ಕ್ಕೆ ತೀರ್ಥಹಳ್ಳಿಯ ಗಾಯತ್ರೀ ಮಂದಿರದಲ್ಲಿ ನೇರವೇರಲಿದೆ. ಈ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ರಾಜ್ಯ ಮುಜುರಾಯಿ ದೇವಾಲಯಗಳ ಒಕ್ಕೂಟ, ಬೆಂಗಳೂರು ಇದರ ಕಾರ್ಯದರ್ಶಿಗಳಾದ ಕೆ.ಎಸ್.ಎನ್ ದೀಕ್ಷಿತರು ಇವರು ಭಾಗವಹಿಸಲಿದ್ದಾರೆ.

Oplus_131072

ಒಕ್ಕೂಟದ ಉದ್ಘಾಟನಾ ಸಮಾರಂಭಕ್ಕೆ ಶಾಸಕರಾದ ಆರಗ ಜ್ಞಾನೇಂದ್ರ, ಜಿಲ್ಲಾ ದಂಡಾಧಿಕಾರಿ ಗುರುದತ್ತ ಹೆಗಡೆ., ತೀರ್ಥಹಳ್ಳಿ ತಹಶೀಲ್ದಾರ ಶ್ರೀ ರಂಜಿತ್ ಎಸ್., ಶ್ರೀ ಶ್ಯಾಮಸುಂದರ ದೀಕ್ಷಿತರು, ಬೆಂಗಳೂರು, ಮಾಜಿ ಸಚಿವ ಕಿಮ್ಮನೆ ರತ್ನಾಕರ್., ಜಿಲ್ಲಾಧ್ಯಕ್ಷರು-ಮಿಥುನ್ ಅಯ್ಯಂಗಾರ್, ಶಿವಮೊಗ್ಗ, ತಾಲೂಕು ಮುಜುರಾಯಿ ದೇವಾಲಯಗಳ ಒಕ್ಕೂಟದ ಅಧ್ಯಕ್ಷರಾದ ರಾಘವೇಂದ್ರ ಭಟ್,

Oplus_131072

ಉಪಾಧ್ಯಕ್ಷರಾದ ವಿದ್ಯಾಶಂಕರಶರ್ಮ, ಕಾರ್ಯದರ್ಶಿಗಳಾದ ದರ್ಶನ್ ಬಾಯರ್ ಹಾಗೂ ಇನ್ನಿತರ ಪ್ರಮುಖರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ದೇವಾಲಯಗಳ ಅರ್ಚಕರು, ಆಗಮಿಕ ಮಿತ್ರರು ಮತ್ತು ಪರಿವಾರದವರು ಆಗಮಿಸಿ ಶುಭ ಕೊರಲು ಒಕ್ಕೂಟದ ಪದಾಧಿಕಾರಿಗಳು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *