• ಸುಭಾಷ್ ಶೆಟ್ಟಿ ಹಾಗೂ ಸಂತೋಷ್ ಶೆಟ್ಟಿ ಮಾಲೀಕತ್ವದ ಸನ್ನಿದಿ ಕೇಟರರ್ಸ್
  • ಸು 450 ಬಾಣಸಿಗರಿಂದ ಸಸ್ಯಾಹಾರಿ ಊಟದ ಸಿದ್ಧತೆ
  • ಸನ್ನಿದಿ ಕೇಟರರ್ಸ್ ತಂಡಕ್ಕೆ ತರುಣ್ ಅಭಿನಂದನೆ

ಬೆಂಗಳೂರು : ಚಂದನವನದ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಮದುವೆ ಅತ್ಯಂತ ಅದ್ದೂರಿಯಾಗಿ ನಡೆದಿದ್ದು, ಇಂದು ನವ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಈ ವೇಳೆ ಮಲೆನಾಡಿನವರಾದ ಸನ್ನಿದಿ ಕೇಟರರ್ಸ್ ತರುಣ್ ಹಾಗೂ ಸೋನಲ್ ಮೊಂತೆರೊ ರವರ ಮದುವೆಗೆ ಶುದ್ಧ ಸಸ್ಯಾಹಾರಿ ಅಡುಗೆ ಮಾಡಿದ್ದು ತೀರ್ಥಹಳ್ಳಿ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.

Oplus_131072

ಸನ್ನಿದಿ ಕೇಟರರ್ಸ್ ಸುಭಾಷ್ ಶೆಟ್ಟಿ ಹಾಗೂ ಸಂತೋಷ್ ಶೆಟ್ಟಿ ಮಾಲೀಕತ್ವದ ಸಂಸ್ಥೆಯಾಗಿದ್ದು, ನಿರ್ದೇಶಕ ತರುಣ್ ರವರ ಮದುವೆಗೆ ಸು 450 ಬಾಣಸಿಗರಿಂದ ಅಡುಗೆ ತಯಾರಿಸಲಾಗಿದೆ,ಅದರಲ್ಲಿ ವೆಲ್ಕಮ್ ಹೊಸ್ಟ್ ಆಗಿ 85 ಜನ ಮಹಿಳೆಯರು, ಜೊತೆಗೆ 50 ಜನ ಹೋಟೆಲ್ ಮ್ಯಾನೇಜ್ಮೆಂಟ್ ಹುಡುಗರು ಇದ್ದರು.4 ಕಡೆ ವಿಷಲವಾದ ಅಡುಗೆ ಮನೆಯಲ್ಲಿ ಅಡುಗೆ ಸಿದ್ದಗೊಂಡಿದ್ದು ಜೊತೆಗೆ 05 ಸಾಮಾನ್ಯ ಕೌಂಟರ್ಗಳು,ವಿ ಐ ಪಿ 3 ಕೌಂಟರ್ ಇದ್ದವು,ಹಿಂದಿನ ದಿನದ ರಿಸೆಪ್ಶನ್ ಗೆ 180 ತರಹದ ಖಾದ್ಯಗಳು ಹಾಗೂ ಮುಹೂರ್ತಕ್ಕೆ 60 ತರಹದ ಖಾದ್ಯಗಳಿದ್ದವು, ರಾತ್ರಿ ಸುಮಾರು 6ಸಾವಿರದಿಂದ 7 ಸಾವಿರ ಜನಕ್ಕೆ ಅಡುಗೆ ಮಾಡಲಾಗಿದ್ದು, ಇಂದು ಮದ್ಯಾಹ್ನ ಸು 3 ಸಾವಿರ ಜನರಿಗೆ ಅಡುಗೆ ಮಾಡಿದ್ದು ಸ್ವಲ್ಪವು ಲೋಪ ದೋಷವಾಗದಂತೆ, ಕೊರತೆಯಾಗದಂತೆ ಯಶಸ್ವಿಯಾಗಿ ನಡೆಸಿಕೊಟ್ಟ ಕಾರಣ ತರುಣ್ ಸುಧೀರ್ ಹಾಗೂ ಸೋನಲ್ ವೇದಿಕೆ ಮೇಲೆ ಕರೆದು ಅಭಿನಂದಿಸಿದ್ದು ತೀರ್ಥಹಳ್ಳಿ ಜನತೆಯ ಮೆಚ್ಚುಗೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *