- ಸತ್ಯಶೋಧ ಮಾಧ್ಯಮಕ್ಕೆ ಪೋಷಕರ ದೂರು

ತೀರ್ಥಹಳ್ಳಿ : ತಾಲೂಕಿನ ಸೊಪ್ಪುಗುಡ್ಡೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ಯಾಲ್ಸಿಯಂ ಮಾತ್ರೆ ಸೇವಿಸಿ 15 ಜನ ವಿದ್ಯಾರ್ಥಿನಿಯರು ವಾಂತಿ – ಬೇದಿ ಯಾಗಿ ಅಸ್ವಸ್ಥ ರಾದ ಘಟನೆ ನಡೆಸಿದೆ.ಪ್ರಿನ್ಸಿಪಾಲ್ ಶೇಷಗಿರಿಯವರಿಗೆ ವೈದ್ಯರು ಸೂಚಿಸಿದಂತೆ ಕ್ಯಾಲ್ಸಿಯಂ ಮಾತ್ರೆ ವಿದ್ಯಾರ್ಥಿಗಳಿಗೆ ನೀಡಲು ಹೇಳಿದ್ದು, ಅದರಂತೆ ಮದ್ಯಾಹ್ನದ ಊಟದ ನಂತರ ಸೇವಿಸಲು ಮೊದಲೆ ತಿಳಿಸಲಾಗಿತ್ತು ಆದರೆ ಪ್ರಸ್ತುತ ಕಾಲೇಜು ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಇಲ್ಲದಿರುವುದರಿಂದ ಊಟಕ್ಕೆ ಮೊದಲೇ ಮಾತ್ರೆ ಸೇವಿಸಿದ್ದು ಈ ಅನಾರೋಗ್ಯಕ್ಕೆ ಕಾರಣವಾಗಿದೆ.ಕೂಡಲೇ ವೈದ್ಯರನ್ನು ಸಂಪರ್ಕಿಸಿದ್ದು
ಟಿ ಹೆಚ್ ಓ ಅನಿಕೇತನ್ ಅವರು ತಿಳಿಸಿದಂತೆ.. ” ಮಾತ್ರೆಗಳನ್ನು ಊಟದ ಮೊದಲೇ ಸೇವನೆ ಹಾಗೂ ಗ್ಯಾಸ್ಟ್ರಿಕ್ ಇರುವವರಿಗೆ ಈ ಸಮಸ್ಯೆ ಕಾಡುವುದು ಸಹಜ. ವಿದ್ಯಾರ್ಥಿನಿಯರು ಹಾಗೂ ಪೋಷಕರು ಈ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ ಎಂದರು.ಹೇಗೆ ಇರಲಿ ಮಕ್ಕಳಿಗೆ ಮಾತ್ರೆ ಕೊಡುವ ಮುನ್ನ ಅದರ ದಿನಾಂಕ, ಹಾಗೂ ಯಾವ ಮಾತ್ರೆ, ಯಾವ ಸಮಯಕ್ಕೆ ತೆಗೆದುಕೊಳ್ಳಬೇಕು ಎಂಬುದು ಎಲ್ಲರೂ ತಿಳಿದುಕೊಂಡು ಉಪಯೋಗಿಸುವುದು ಸೂಕ್ತ ಎಂಬುದು ಸತ್ಯಶೋಧ ಮಾಧ್ಯಮದ ಕಳಕಳಿ.


