ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಬಸ್ ನಿಲ್ದಾಣದ ಹತ್ತಿರ ಆಭರಣ ಜ್ಯುವೆಲ್ಲರ್ಸ್ ಎದುರು ನೂತನವಾಗಿ ಗ್ಲಾಮರ್ ಕೇರ್ ಫ್ಯಾಮಿಲಿ ಸಲೂನ್‎ ಫೆ 26 ರಂದು ಶುಭಾರಂಭಗೊಂಡಿದ್ದು , ಈ ಸಲೂನ್ನನ್ನು ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.ಗ್ಲಾಮರ್ ಕೇರ್ ಫ್ಯಾಮಿಲಿ ಸಲೂನ್‎ ಈಗಾಗಲೇ‎ ರಾಜ್ಯದ ಹಲವು‎ ತಾಲೂಕು‎ ಹಾಗೂ‎ ಜಿಲ್ಲಾ‎ ಕೇಂದ್ರದಲ್ಲಿ‎ ತನ್ನ ಶಾಖೆಯನ್ನು ತೆರೆದು‎ ಅತ್ಯುನ್ನತ‎ ಸೇವೆಯನ್ನು ಗ್ರಾಹಕರಿಗೆ ನೀಡಿ‎ ಗ್ರಾಹಕರ ಮೆಚ್ಚುಗೆಗೆ‎ ಪಾತ್ರವಾಗಿದ್ದು

ಇದೀಗ ತೀರ್ಥಹಳ್ಳಿ‎ ಯಲ್ಲಿ‎ ಗ್ಲಾಮರ್ ಕೇರ್ ನ‎ ಶಾಖೆಯು‎ ತೀರ್ಥಹಳ್ಳಿಗರಿಗೆ ಸಂತಸದ ವಿಷಯವಾಗಿದೆ.ಇನ್ನು ಮಾಜಿ ಸಚಿವರಾದ ಕಿಮ್ಮನೆ ರತ್ನಕರ್, ಹಾಗೂ ಮಲೆನಾಡು ಪ್ರದೇಶಭಿವೃದ್ಧಿ ನಿಗಮ ದ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥ್ ಗೌಡರು, ಸ್ಪಿನ್ ಸಲೂನ್ ಮಾಲೀಕರಾದ ನಾಮದೇವ್ ನಾಗರಾಜ್, ಹಾಗೂ ಶಿವಮೊಗ್ಗ ಜಿಲ್ಲಾ ಸವಿತ ಸಮಾಜದ ಅಧ್ಯಕ್ಷರಾದ ಎಂ ಜಿ ಬಾಲು ಅತಿಥಿಗಳಾಗಿ ಆಗಮಿಸಿ ನೂತನ ಶಾಖೆಗೆ ಶುಭಹಾರೈಸಿದರು.

Leave a Reply

Your email address will not be published. Required fields are marked *