
ತೀರ್ಥಹಳ್ಳಿ : ತಾಲೂಕಿನ ಅರೇಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ದಿನಾಂಕ 10 /11/2025ರಂದು ನಡೆದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆ ಯಲ್ಲಿ ಅಧ್ಯಕ್ಷರಾಗಿ ರಾಘವೇಂದ್ರ ಹೆಚ್ ಎನ್ ಅರಮನೆತೋಟ ರವರು ಮೂರನೇ ಬಾರಿ ಅವಿರೋದವಾಗಿ ಆಯ್ಕೆಯಾದರು ಜೊತೆಗೆ ಸುರೇಶ ಕಾರಬೈಲು ರವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ನಿರ್ದೇಶಕರು ಗಳಾದ ಸುರೇಂದ್ರ ಮೂರ್ತಿ,ಚಂದ್ರಪ್ಪ ಹೆಚ್ ಟಿ, ರಾಘವೇಂದ್ರ ಎಂ ಎಸ್, ರಾಜೀವ ಎಲ್ ಎಂ, ರಮೇಶ್ ಎಂ ಸಿ,, ಶರಾವತಿ ಹರ್ಷ ಹೆಚ್ ಯು, ಪವನ್ ಕಾರ್ಯದರ್ಶಿ ಮದನ್ ಬಿ ಟಿ ಉಪಸ್ಥಿತರಿದ್ದರು ರಿಟರ್ನಿಗ್ ಅಧಿಕಾರಿಯಾಗಿ ಅರೇಹಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಯುವರಾಜ್ ಕುಮಾರ್ ಹೆಚ್ಎಸ್ ರವರು ಚುನಾವಣೆ ನಡೆಸಿಕೊಟ್ಟರು.


