
ತೀರ್ಥಹಳ್ಳಿ : ಮೂಲತಃ ಹಾಲಾಡಿಯ ಕೀರ್ತೆಶ್ ಎಂಬ ವ್ಯಕ್ತಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು ದಿ 29 ರಂದು ತೀರ್ಥಹಳ್ಳಿಯಲ್ಲಿ ಬಸ್ ಇಳಿದಿದ್ದಾರೆ,

ಅವರ ಬ್ಯಾಗ್, ಪರ್ಸ್ ಮೊಬೈಲ್ ತೀರ್ಥಹಳ್ಳಿ ಸಹ್ಯಾದ್ರಿ ಪೆಟ್ರೋಲ್ ಬಂಕ್ ಬಳಿ ದೊರೆತಿದ್ದು ನಂತರ ನಾಪತ್ತೆಯಾಗಿದ್ದರು,

ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸತ್ಯಶೋಧ ಮಾಧ್ಯಮ ಸುದ್ದಿ ವರದಿ ಮಾಡಿದ್ದ ಬೆನ್ನಲೇ ಕೀರ್ತೆಶ್ ತೀರ್ಥಹಳ್ಳಿಯ ಶಿವರಾಜ ಪುರದಲ್ಲಿ ಸಿಕ್ಕಿದ್ದು ಮೊದಲಿಗೆ ಪೊಲೀಸ್ ಠಾಣೆಗೆ ಕರೆದೋಯ್ದು ನಂತರ ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದೆ. ಈ ವೇಳೆ ಕೀರ್ತೆಶ್ ಕುಟುಂಬದವರು ಈ ಹುಡುಕಾಟದಲ್ಲಿ ತೊಡಗಿದ್ದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.


