Oplus_0
  • ಕಳಚಿತು ಸಾಹಿತ್ಯ ಕ್ಷೇತ್ರದ ಕೊಂಡಿ

ನಾಡಿನ ಹಿರಿಯ ಲೇಖಕಿ ಮನೋರಮಾ ಎಂ.ಭಟ್ (92) ವಯೋಸಹಜ ಅಸೌಖ್ಯದಿಂದ ರವಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ವಿಧವೆಯರು ಮಾಂಗಲ್ಯವನ್ನು ತೆಗೆಯಬೇಕೆಂಬ ನಂಬಿಕೆಯನ್ನು ವಿರೋಧಿಸಿ ಹಲವಾರು ಸಮಯ ಹೋರಾಟ ನಡೆಸಿದ ಕವಯಿತ್ರಿ ಇವರು ಸಂಗೀತ, ನೃತ್ಯ, ನಾಟಕ ರಚನೆ ಮತ್ತು ಅಭಿನಯದಲ್ಲಿ ಆಸಕ್ತಿ ಹೊಂದಿದ್ದರು. ೪೦ಕ್ಕೂ ಅಧಿಕ ನಾಟಕಗಳನ್ನು ರಚಿಸಿ ದ್ದಾರೆ. ‘ಮೋತಿ ಪಾಠ ಕಲಿಸಿತ್ತು’, ‘ಶಬ್ದಗಳಾಗದ ಧ್ವನಿಗಳು’, ‘ಸ್ವಯಂವರ’ ಕಥಾ ಸಂಕಲನ, ಅಜ್ಜಿ ಹೇಳಿದ ಕಥೆ, ಇಂದಲ್ಲ ನಾಳೆ, ಮರದ ಕಥೆ, ಋಣಾನುಬಂಧ, ಚಂದ್ರಮತಿಯ ಕನಸು ನಾಟಕಗಳು, ಹೊಸ ಹಾದಿ, ಬಲಿ, ನಿರ್ಧಾರ, ಆಯ್ಕೆ ನಾಟಕ ಸಂಕಲನಗಳನ್ನು ರಚಿಸಿ ನಾಡಿನ ಸಾಹಿತಿಗಳಲೊಬ್ಬರಾಗಿದ್ದ ಇವರನ್ನು ಕಳೆದುಕೊಂಡಿದ್ದು ತುಂಬಲಾರದ ನಷ್ಟವಾಗಿದೆ.

Leave a Reply

Your email address will not be published. Required fields are marked *